* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday 13 October 2018

"ನಾಡೋಜ", ವಿದ್ವಾಂಸ, ಪತ್ರಕರ್ತ ಡಾ.ಎಸ್.ಆರ್.ರಾಮಸ್ವಾಮಿ ಅವರೊಡನೆ.. With "Nadoja" Dr.S.R.Ramaswamy

ಅದೊಂದು ಅಪರೂಪದ ಸಂದರ್ಭ. ನಾಡಿನ ಖ್ಯಾತ ವಿದ್ವಾಂಸರೂ, ಬಹುಭಾಷಾ ಪಂಡಿತರೂ, ಪತ್ರಕರ್ತರೂ, ಮಿಗಿಲಾಗಿ ಡಿವಿಜಿಯವರ ಮಾನಸ ಪುತ್ರರಂತೆ ಡಿವಿಜಿಯವರ ಒಡನಾಡಿಯಾಗಿದ್ದವರೂ ಆದ  "ನಾಡೋಜ" ಡಾ.ಎಸ್.ಆರ್.ರಾಮಸ್ವಾಮಿ ಅವರು ದಿ. 26-04-2016 ರಂದು ತುಮಕೂರಿನಲ್ಲಿ ನಾವು ನಡೆಸುವ "ಡಿವಿಜಿ ನೆನಪು" ಮಾಸಿಕ ಉಪನ್ಯಾಸ ಮಾಲಿಕೆಯ 50 ನೇ ತಿಂಗಳಿನ ಕಾರ್ಯಕ್ರಮಕ್ಕೆ ಆಗಮಸಿದ್ದರು. ಸಮಾರಂಭ ಮುಗಿದ ಬಳಿಕ ನಮ್ಮ ತಂದೆಯವರೊಡನೆ ಸುಮಾರು 50-60 ವರ್ಷಗಳ ಹಿಂದಿನ ಘಟನಾವಳಿಗಳನ್ನು ನೆನೆಯುವಾಗ ಸಂತೋಷಪಟ್ಟ ಅಪರೂಪದ ಚಿತ್ರವಿದು... ದಿ. ಜಿ.ಎಂ.ರಾಜಾಚಾರ್, ದಿ.ಎಸ್.ಮಲ್ಲಿಕಾರ್ಜುನಯ್ಯ ಅವರೊಂದಿಗಿನ ಆರೇಳು ದಶಕಗಳ ಒಡನಾಟ, ಬೆಂಗಳೂರು ಸೆಂಟ್ರಲ್ ಜೈಲುವಾಸ ಇತ್ಯಾದಿ ಮೆಲುಕು ಹಾಕುವಾಗ ಒಂದು ಸಂದರ್ಭದಲ್ಲಿ ಅವರು ಹರ್ಷೋದ್ಗಾರ ಮಾಡಿದ ಅಪೂರ್ವ ಸಂದರ್ಭವದು. ಅಂಥ ಮೇರು ವಿದ್ವಾಂಸರನ್ನು ನೋಡುವ, ಅವರ ಮಾತು ಆಲಿಸುವ, ಅವರೊಡನೆ ಆಪ್ತವಾಗಿ ಕೆಲ ಕಾಲ ಮಾತನಾಡುವ ಸುಸಂದರ್ಭ ನಮಗೆ ಲಭಿಸಿದ್ದು ನಮ್ಮ ಪಾಲಿನ ಅದೃಷ್ಟವೇ ಹೌದು.. with verern journalist, famous writer, "Nadoja" Dr.S.R.Ramaswamy











 









No comments:

Post a Comment