* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 23 December 2018

ಖ್ಯಾತ ಚಿತ್ರನಟ ಶ್ರೀ ರಮೇಶ್ ಅರವಿಂದ್ ಅವರೊಡನೆ with famous film actor Sri Ramesh Aravnind.. (R S Iyer Tumkur)

ಡಿವಿಜಿ ನನ್ನ ಫೇವರೇಟ್
********************
“ಡಿವಿಜಿ ನನ್ನ ಫೇವರೇಟ್” ಎಂದು ಕನ್ನಡದ ಖ್ಯಾತ ಚಲನಚಿತ್ರನಟರಾದ ಶ್ರೀ ರಮೇಶ್ ಅರವಿಂದ್ ಅವರು ಹೃತ್ಪೂರ್ವಕವಾಗಿ ನುಡಿದಾಗ ನಮಗಾದ ಸಂತಸ ಅಷ್ಟಿಷ್ಟಲ್ಲ.
ತುಮಕೂರಿನಲ್ಲಿ ನಮ್ಮ ಸರಸ್ ಫೌಂಡೇಷನ್ ವತಿಯಿಂದ ಕಳೆದ 73 ತಿಂಗಳುಗಳಿಂದ “ಡಿವಿಜಿ ನೆನಪು” ಶೀರ್ಷಿಕೆಯಡಿ ಡಿವಿಜಿ ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿರುವುದನ್ನು ಹಾಗೂ ಇದೇ ಡಿಸೆಂಬರ್ 29 ರಂದು 74 ನೇ ತಿಂಗಳಿನ ಕಾರ್ಯಕ್ರಮ ನಡೆಯಲಿರುವುದನ್ನು ನಾನು ಮತ್ತು ವಿಶ್ವನಾಥನ್ ತಿಳಿಸಿದಾಗ, ಅಚ್ಚರಿ ಹಾಗೂ ಸಂತೋಷದಿಂದ “ವಾವ್’’ ಎಂದು ಉದ್ಗರಿಸುತ್ತ ಮೇಲಿನಂತೆ ಪ್ರತಿಕ್ರಿಯಿಸಿದರು.
ಇಂದು (23-12-2018, ಭಾನುವಾರ) ಬೆಳಗ್ಗೆ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ವತಿಯಿಂದ ಏರ್ಪಟ್ಟಿದ್ದ ಸಮಾರಂಭದಲ್ಲಿ ಖ್ಯಾತ ಕಾದಂಬರಿಕಾರ ಡಾ.ಕೆ.ಎನ್.ಗಣೇಶಯ್ಯ ಅವರ ಮೂರು ಕೃತಿಗಳನ್ನು ಬಿಡುಗಡೆ ಮಾಡಲು ಶ್ರೀ ರಮೇಶ್ ಅರವಿಂದ್ ಅವರು ಆಗಮಿಸಿದ್ದರು. ಆಗ ಅವರನ್ನು ಭೇಟಿ ಮಾಡಿ ಮಾತನಾಡುವ ಸುಸಂದರ್ಭ ನನಗೆ ಮತ್ತು ವಿಶ್ವನಾಥನ್ ಗೆ ಲಭಿಸಿತು. ಬಹುಭಾಷಾ ಚಿತ್ರನಟರಾಗಿ ಅಪಾರ ಕೀರ್ತಿ ಗಳಿಸಿದ್ದರೂ, ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಎಲ್ಲರೊಡನೆ ಬೆರೆಯುವ, ಎಲ್ಲರೊಡನೆ ಮಾತನಾಡುವ ರಮೇಶ್ ಅರವಿಂದ್ ಅವರ ಸರಳತೆ, ಸಜ್ಜನಿಕೆ, ಸೌಜನ್ಯ, ಸಹನೆ ನಮ್ಮನ್ನಷ್ಟೇ ಅಲ್ಲದೆ ಅಲ್ಲಿದ್ದ ಎಲ್ಲರ ಹೃದಯವನ್ನೂ ಗೆದ್ದಿತು.


with Sri Ramesh Aravind , Famous Kannada Film Actor... R Vishwanathan Tumkur and R S Iyer Tumkur


                                           R S Iyer Tumkur with Sri Ramesh Aravind


with Sri Ramesh Aravind , Famous Kannada Film Actor... R Vishwanathan Tumkur and R S Iyer Tumkur


with Sri Ramesh Aravind , Famous Kannada Film Actor... R Vishwanathan Tumkur and R S Iyer Tumkur




Sunday 16 December 2018

ಅಮಾನಿಕೆರೆ ಗೆಳೆಯರ ಬಳಗದಿಂದ ಸನ್ಮಾನ- Amanikere- Felicitation to R S Iyer

ತುಮಕೂರು ನಗರದ ಶ್ವಾಸಕೋಶದಂತಿರುವ ಅಮಾನಿಕೆರೆಯ ಪ್ರವೇಶದ್ವಾರದಲ್ಲಿ "ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗ"ದ ಸನ್ಮಿತ್ರರು ಇಂದು (16-12-2018, ಭಾನುವಾರ) ಸಂಜೆ ನಡೆಸಿದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಹಲವು ಗಣ್ಯ ಸಾಧಕರ ಜೊತೆಗೆ ನನ್ನನ್ನೂ ಪ್ರೀತಿಯಿಂದ ಗೌರವಿಸಿದರು. 
ಹಿರೇಮಠಾಧ್ಯಕ್ಷರಾದ ಪ.ಪೂ. ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು, ತುಮಕೂರು ನಗರದ ಶಾಸಕರೂ, ಮಿತ್ರರೂ ಆದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ತುಮಕೂರು ನಗರದ ಡಿವೈಎಸ್ಪಿರವರಾದ ಶ್ರೀ ನಾಗರಾಜ್ ರವರು, ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಎಲ್. ಮಂಜುನಾಥಸ್ವಾಮಿರವರು, "ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗ"ದ ಅಧ್ಯಕ್ಷರೂ, ಮಿತ್ರರೂ ಆದ ಮಾಜಿ ಕಾರ್ಪೊರೇಟರ್ ಶ್ರೀ ಟಿ.ಎಚ್.ವಾಸುದೇವ್ ರವರು, ಬಳಗದ ಗೌರವಾಧ್ಯಕ್ಷರೂ ಮಿತ್ರರೂ ಆದ ಖ್ಯಾತ ಕರಾಟೆಪಟು ಶ್ರೀ ಕರಾಟೆ ಕೃಷ್ಣಮೂರ್ತಿರವರು ಹಾಗೂ ಹಲವು ಮಿತ್ರರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು. ನಮ್ಮ ತಂದೆ ಸ್ವಾತಂತ್ರ್ಯಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರನ್ನೂ ಈ ಸಂದರ್ಭದಲ್ಲಿ ಆಯೋಜಕರು ವೇದಿಕೆಗೆ ಆಹ್ವಾನಿಸಿ ಸಂತಸ ಹಂಚಿಕೊಂಡರು. "ಅಮಾನಿಕೆರೆ ಮುಂಜಾನೆ ಗೆಳೆಯರ ಬಳಗ"ದ ಎಲ್ಲ ಸನ್ಮಿತ್ರರಿಗೂ ನಾನು ಆಭಾರಿಯಾಗಿದ್ದೇನೆ.










Saturday 15 December 2018

ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾರವರೊಡನೆ with Vidvan Anuru Ananthakrishna Sharma

ಲಯ ಲಾವಣ್ಯ ತಾಳವಾದ್ಯ
You Tube: https://youtu.be/idf0my7QedQ
---------------------------
ಸುಮಾರು ಒಂದೂವರೆ ಗಂಟೆಗಳ ಕಾಲ ಅಲ್ಲೊಂದು ಅಲೌಕಿಕ ವಾತಾವರಣವೇ ಸೃಷ್ಟಿಯಾಗಿತ್ತು. ಹನ್ನೊಂದು ಕಲಾವಿದರ ಅಸಾಧಾರಣ ಪ್ರತಿಭೆಯಿಂದ ತಾಳ ವಾದ್ಯಗಳಿಂದ ಹೊಮ್ಮುತ್ತಿದ್ದ ಲಯ ಲಾವಣ್ಯದಲ್ಲಿ ಎಲ್ಲರ ಮನ ತಲ್ಲೀನವಾಗಿಹೋಗಿತ್ತು. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸುವಿಖ್ಯಾತ ವಿದ್ವಾಂಸರಾದ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಅವರ ನೇತೃತ್ವದಲ್ಲಿ ಇಂದು (15-12-2018, ಶನಿವಾರ) ಸಂಜೆ ಗುಬ್ಬಿ ಪಟ್ಟಣದಲ್ಲಿರುವ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆದ "ತಾಳ ವಾದ್ಯ ಲಯ ಲಾವಣ್ಯ" ಕಾರ್ಯಕ್ರಮ ಶ್ರೋತೃಗಳಿಗೆ ಇಂತಹುದೊಂದು ವಿಶಿಷ್ಟಾನುಭವ ತಂದುಕೊಟ್ಟಿತು. ಅವರನ್ನು ನೋಡುವ, ಅವರೊಡನೆ ಮಾತನಾಡುವ, ಅವರ ಕಾರ್ಯಕ್ರಮ ಆಸ್ವಾದಿಸುವ ಸುಯೋಗ ಇಂದು ನಮಗೆ (ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ -ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್) ಲಭಿಸಿತು.
ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಅವರು ಅಷ್ಟೊಂದು ಪ್ರಖ್ಯಾತ ವಿದ್ವಾಂಸರಾಗಿದ್ದರೂ, ನಮ್ಮ ತಂದೆಯವರ ಪರಿಚಯ ಆದೊಡನೆ ಎದ್ದುನಿಂತು ಅವರ ಪಾದವನ್ನು ಸ್ಪರ್ಶಿಸಿ ನಮಸ್ಕರಿಸಿದ್ದು "ವಿದ್ಯಾ ದದಾತಿ ವಿನಯಂ" ಎಂಬುದನ್ನು ಅನಾವರಣಗೊಳಿಸಿತು. ಅದೇ ರೀತಿ ಅವರೊಂದಿಗಿನ ಮಾತುಕತೆ ನಮ್ಮೆಲ್ಲರಿಗೂ ಆಹ್ಲಾದವನ್ನುಂಟುಮಾಡಿತು.
ಗುಬ್ಬಿವೀರಣ್ಣ ಟ್ರಸ್ಟ್ ವತಿಯಿಂದ ಖ್ಯಾತ ಕಲಾವಿದೆ ಶ್ರೀಮತಿ ಜಯಶ್ರೀರವರು ಮೂರು ದಿನಗಳ ವಿಶೇಷ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಿದ್ದು, ಮೊದಲನೇ ದಿನವಾದ ಇಂದು "ತಾಳ ವಾದ್ಯ ಲಯ ಲಾವಣ್ಯ" ಕಾರ್ಯಕ್ರಮ ಸೊಗಸಾಗಿ ನೆರವೇರಿತು.







Saturday 8 December 2018

ಖ್ಯಾತ ಪತ್ರಕರ್ತ ಶ್ರೀ ಪಿ.ಸಾಯಿನಾಥ್ ಮತ್ತು ಶ್ರೀ ಬರಗೂರು ರವರೊಡನೆ, with noted Jounalist Sri P. Sainath & Writer Sri Baraguru Ramachandrappa (R S Iyer Tumkur)

ಖ್ಯಾತ ಪತ್ರಕರ್ತರಾದ ಶ್ರೀ ಪಿ.ಸಾಯಿನಾಥ್ ಅವರೊಡನೆ...
---------------------------------------
ರಾಷ್ಟ್ರದ ಹೆಸರಾಂತ ಪತ್ರಕರ್ತರಾದ ಹಾಗೂ ರಾಷ್ಟ್ರಾದ್ಯಂತ ಗಮನಸೆಳೆದ "Everybody Loves Draught" ಕೃತಿಯ ಕರ್ತೃ ಶ್ರೀ ಪಿ.ಸಾಯಿನಾಥ್ ಅವರನ್ನು ನೋಡುವ ಹಾಗೂ ಅವರ ಚಿಂತನಾರ್ಹ ಹಾಗೂ ಪ್ರಖರವಾದ ಮಾತುಗಳನ್ನು ಆಲಿಸುವ ಸುಸಂದರ್ಭ ಇಂದು (08-12-2018, ಶನಿವಾರ) ನನಗೆ ತುಮಕೂರಿನಲ್ಲೇ ಒದಗಿಬಂತು. ಈ ಮೂಲಕ ಬಹುಕಾಲದ ಆಶಯವೊಂದು ಈಡೇರಿದಂತಾಯಿತು. ಅಂದಹಾಗೆ ಇವರು ಭಾರತದ ಮಾಜಿ ರಾಷ್ಟ್ರಪತಿ ದಿ.ಶ್ರೀ ವಿ.ವಿ.ಗಿರಿ ಅವರ ಮೊಮ್ಮಗ. 


ಬಂಡಾಯ ಸಾಹಿತ್ಯ ಸಂಘಟನೆಯಿಂದ ತುಮಕೂರಿನಲ್ಲಿ "ಸಮೂಹ ಮಾಧ್ಯಮ ಮತ್ತು ಬಂಡಾಯ ಪ್ರಜ್ಞೆ" ಕುರಿತ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಲು ಅವರು ಆಗಮಿಸಿದ್ದರು. ಅವರೊಡನೆ ನಾನೂ ಇರುವ ಒಂದು ಚಿತ್ರ ಇಲ್ಲಿದೆ. ಖ್ಯಾತ ಸಾಹಿತಿಗಳೂ ಆತ್ಮೀಯರೂ ಆದ ಶ್ರೀ ಬರಗೂರು ರಾಮಚಂದ್ರಪ್ಪರವರು, ಪತ್ರಕರ್ತ ಮಿತ್ರರಾದ ಶ್ರೀ ಇಂದ್ರಕುಮಾರ್ ಮತ್ತು ಶ್ರೀ ಮಹೇಂದ್ರ ಅವರೂ ಇದ್ದಾರೆ.

ಇದಕ್ಕೂ ಮೊದಲು ಸಮಾರಂಭ ಸ್ಥಳಕ್ಕೆ ನಾನು ತೆರಳಿದೊಡನೆ ಎದುರಾದವರು ಶ್ರೀ ಬರಗೂರು ರಾಮಚಂದ್ರಪ್ಪನವರು. ಎಂದಿನಂತೆ ಅವರು ಕೇಳಿದ ಮೊದಲ ಪ್ರಶ್ನೆಯೇ- "ನೀವು ಇತ್ತೀಚೆಗೆ ಪ್ರಜಾವಾಣಿಯ ವಾಚಕರ ವಾಣಿಯಲ್ಲಿ ಏಕೆ ಬರೆಯುತ್ತಿಲ್ಲ?". ನಾನು ಮುಗುಳ್ನಕ್ಕೆ. ಹಾಗೆಯೆ ಕೆಲ ಹೊತ್ತು ಅವರೊಡನೆ ಮಾತನಾಡುವ ಸುಸಂದರ್ಭ ನನಗೆ ಲಭಿಸಿತು

R S Iyer with Sri P Sainath, Noted Journalist

Sri P Sainath, R S Iyer & Sri Baraguru Ramachandrappa
Baraguru Ramachandrappa and R S Iyer



with Sri P Sainath... R S Iyer Tumkur & R Vishwanathan Tumkur

Friday 7 December 2018

ಸನ್ಮಾನ- ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರರವರಿಂದ- Felicitation by Dr.G.Parameshwara, Deputy C.M.

ತುಮಕೂರಿನ ಹನುಮಂತಪುರದಲ್ಲಿರುವ ಶ್ರೀ ಪೇಟೆ ಕೋಲ್ಲಾಪುರದಮ್ಮ ದೇವಾಲಯದಲ್ಲಿ ದಿನಾಂಕ 07-12-2018, ಶುಕ್ರವಾರ ಸಂಜೆ ಅಗ್ನಿಕುಲ ತಿಗಳ ಜನಾಂಗದ ವತಿಯಿಂದ ಏರ್ಪಟ್ಟಿದ್ದ ಬೃಹತ್ “ಲಕ್ಷ ದೀಪೋತ್ಸವ”ದ ಸುಸಂದರ್ಭದಕ್ಕೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರರವರು ಆಮಂತ್ರಿತರಾಗಿದ್ದರು. ಈ ಬಾರಿಯ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಪುರಸ್ಕೃತನಾದ ಹಿನ್ನೆಲೆಯಲ್ಲಿ ತಿಗಳ ಜನಾಂಗದ ಪ್ರಮುಖರು ನನ್ನನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸುವ ಸಲುವಾಗಿ ಆಹ್ವಾನಿಸಿದ್ದರು. ಅಲ್ಲಿ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರರವರು ನನ್ನನ್ನು ದೇವಾಲಯ ಹಾಗೂ ತಿಗಳ ಜನಾಂಗದ ಪರವಾಗಿ ಪ್ರೀತಿಯಿಂದ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಕೆ.ರಾಕೇಶ್ ಕುಮಾರ್, “ಪ್ರಜಾಪ್ರಗತಿ” ಸಂಪಾದಕರಾದ ಶ್ರೀ ಎಸ್.ನಾಗಣ್ಣ, ತುಮಕೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶ್ರೀ ನರಸಿಂಹಮೂರ್ತಿ, ತಿಗಳ ಜನಾಂಗದ ಮುಖಂಡ ಶ್ರೀ ರವೀಶ್ ಜಹಂಗೀರ್ ಮೊದಲಾದ ಪ್ರಮುಖರು ಗಣ್ಯರುಗಳು ಉಪಸ್ಥಿತರಿದ್ದರು.




ಸನ್ಮಾನ- ಕೊಲ್ಲಾಪುರದಮ್ಮ ದೇವಾಲಯ- Felicitation - R S Iyer

ತುಮಕೂರಿನ ಹನುಮಂತಪುರದಲ್ಲಿರುವ ಶ್ರೀ ಪೇಟೆ ಕೋಲ್ಲಾಪುರದಮ್ಮ ದೇವಾಲಯದಲ್ಲಿ  ದಿನಾಂಕ 07-12-2018, ಶುಕ್ರವಾರ ಸಂಜೆ ಅಗ್ನಿಕುಲ ತಿಗಳ ಜನಾಂಗದ ವತಿಯಿಂದ ಏರ್ಪಟ್ಟಿದ್ದ ಬೃಹತ್ “ಲಕ್ಷ ದೀಪೋತ್ಸವ”ದ ಸುಸಂದರ್ಭದಲ್ಲಿ ತಿಗಳ ಜನಾಂಗದ ಮುಖಂಡರಾದ ಶ್ರೀ ಟಿ.ಎಲ್. ಕುಂಭಯ್ಯರವರು, ಶ್ರೀ ಎನ್.ಎಸ್.ಶಿವಣ್ಣ, ಮಾಜಿ ಕಾರ್ಪೊರೇಟರ್ ಗಳಾದ ಶ್ರೀ ಪ್ರೆಸ್ ರಾಜಣ್ಣ ಮತ್ತು ಶ್ರೀ ರಾಮಕೃಷ್ಣ ಅವರು ನನ್ನನ್ನು ಪ್ರೀತಿಯಿಂದ ಗೌರವಿಸಿದರು. ಈ ಎಲ್ಲ ವಿಶ್ವಾಸಿಗರಿಗೆ ಹಾಗೂ ನನ್ನನ್ನು ಆಹ್ವಾನಿಸಿದ ಕಾರ್ಪೊರೇಟರ್ ಹಾಗೂ ತಿಗಳ ಜನಾಂಗದ ಮುಖಂಡರಾದ ಶ್ರೀ ನರಸಿಂಹಮೂರ್ತಿ ಅವರಿಗೆ ಕೃತಜ್ಞನಾಗಿದ್ದೇನೆ.




ಸನ್ಮಾನ - Halappa Foundarion Felicitation- R S Iyer-

ಹಾಲಪ್ಪ ಫೌಂಡೇಷನ್ ವತಿಯಿಂದ ದಿನಾಂಕ 07-12-2018, ಶುಕ್ರವಾರ ತುಮಕೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಶ್ರೀ ಮುರಳೀಧರ ಹಾಲಪ್ಪ ಅವರು ಈ ಬಾರಿಯ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಪುರಸ್ಕೃತರಾದ ಶ್ರೀ ಮಿಡಿಗೇಶಿ ಭೂಷಣ್, ಶ್ರೀ ಬಂಡಿ ಚೌಡಯ್ಯ, ಶ್ರೀ ಹಫೀಜ್ ಮತ್ತು ಕುಮಾರಿ ಕುಸುಮಾ ಜೈನ್ ಅವರ ಜೊತೆಗೆ ನನ್ನನ್ನೂ ಸನ್ಮಾನಿಸಿದರು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಂ.ಸಿ. ವೇಣುಗೋಪಾಲ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶ್ರೀ ಮುಷ್ತಾಕ್ ಅಹಮದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಬಾ.ಹ.ರಮಾಕುಮಾರಿ, ತುಮಕೂರು ನಗರ ಡಿವೈಎಸ್ಪಿ ಶ್ರೀ ನಾಗರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಮಕೃಷ್ಣ, ಮಾಜಿ ಜಿ.ಪಂ. ಸದಸ್ಯ ಶ್ರೀ ಶ್ರೀನಿವಾಸ ಮೂರ್ತಿ ಮೊದಲಾದ ಹಲವು ಮುಖಂಡರುಗಳು ಉಪಸ್ಥಿತರಿದ್ದರು. ಎಲ್ಲ ಮಿತ್ರರಿಗೂ ಕೃತಜ್ಞತೆಗಳು.


Monday 3 December 2018

ಸನ್ಮಾನ...Felicitation to R S Iyer by M.L.T.A., Tumakuru

ಇತ್ತೀಚೆಗಷ್ಟೇ ಮುಖ್ಯಮಂತ್ರಿಗಳಿಂದ ಸನ್ಮಾನಿತರಾದ ತುಮಕೂರು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ವೀರಭದ್ರಯ್ಯರವರು, ಸಹಕಾರ ಕ್ಷೇತ್ರದಲ್ಲಿನ ಸಾಧನೆಗಾಗಿ ಪುರಸ್ಕೃತರಾಗಿರುವ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪ ರವರು ಮತ್ತು ಹಿರಿಯ ಪ್ರಯೋಗಶಾಲಾ ತಂತ್ರಜ್ಞರಾಗಿರುವ ಶ್ರೀಮತಿ ನುಜರತ್ ಉನ್ನೀಸಾ ರವರೊಂದಿಗೆ ನನ್ನನ್ನೂ ಗೌರವಿಸಿದವರು ತುಮಕೂರಿನ "ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ್ ಅಸೋಸಿಯೇಷನ್'' ಪದಾಧಿಕಾರಿಗಳು.
ದಿ.02-12-2018 ರಂದು ಭಾನುವಾರ ಸಂಜೆ ತುಮಕೂರಿನ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಸದರಿ ಸಂಘದ ಅಧ್ಯಕ್ಷರೂ, ಮಿತ್ರರೂ ಆದ ಶ್ರೀ ಬೆಳ್ಳಿ ಲೋಕೇಶ್ ರವರ ನೇತೃತ್ವದಲ್ಲಿ ಆಚರಿಸಿದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಈ ಸನ್ಮಾನವೂ ನಡೆಯಿತು. ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು. ಸನ್ಮಾನಿತರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಅತಿಥಿಗಳಿಗೆ ಸನ್ಮಾನದ ಜೊತೆಗೆ "ಒಂದೊಂದು ಸಸಿ''ಯನ್ನು ನೀಡಿದ್ದು ವಿಶೇಷವಾಗಿತ್ತು ಮತ್ತು ಶ್ರೀ ಬೆಳ್ಳಿ ಲೋಕೇಶ್ ಅವರ ಸೃಜನಶೀಲ ಮನಸ್ಸಿಗೆ ಸಾಕ್ಷಿಯಾಗಿತ್ತು. ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ. ಎಸ್.ಜಿ. ಪರಮೇಶ್ವರಪ್ಪರವರು, ಸಂಘದ ಗೌರವ ಅಧ್ಯಕ್ಷರಾದ ಅಂಬ್ಲಿ ನಾಗರಾಜ್ ರವರು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೇರೆಯವರನ್ನು ಸನ್ಮಾನಿಸಿ, ಗೌರವಿಸಿ ತಾವು ಸಂತೋಷಪಟ್ಟ ಶ್ರೀ ಬೆಳ್ಳಿ ಲೋಕೇಶ್ ರವರು ಮತ್ತು ಅವರ ತಂಡದವರಿಗೆ ಕೃತಜ್ಞತೆಗಳು..








Sunday 2 December 2018

ಶ್ರೀರಾಮನಗರದಲ್ಲಿ ಸನ್ಮಾನ Felicitation at Sriramanaga (R S Iyer)

ಮಿತ್ರರಾದ ಮಾಜಿ ಕಾರ್ಪೊರೇಟರ್ ಶ್ರೀ ಟಿ.ಎಚ್.ಬಾಲಕೃಷ್ಣರವರು ಮತ್ತು ಹೋಟೆಲ್ ಉಡ್ ಲ್ಯಾಂಡ್ಸ್ ಮಾಲೀಕರಾದ ಶ್ರೀ ಗುರು ಬಳ್ಳಕುರಾಯರವರು ವಿಶ್ವಾಸವಿಟ್ಟು ಆಹ್ವಾನಿಸಿದಾಗ, ಒಪ್ಪಲೇಬೇಕಾಯಿತು. ಶ್ರೀರಾಮನಗರವು ನಮ್ಮ ತುಮಕೂರಿನ ಹಳೆಯ ಬಡಾವಣೆಗಳಲ್ಲೊಂದು. ಇಲ್ಲಿನ ಶ್ರೀರಾಮ ಕನ್ನಡ ಯುವಕ ಸಂಘವು ಶ್ರೀ ಬಾಲಕೃಷ್ಣರವರ ನೇತೃತ್ವದಲ್ಲಿ ದಿನಾಂಕ 01-12-2018, ಶನಿವಾರ ರಾತ್ರಿ ಆಚರಿಸಿದ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾದೆ. ಕರಾಟೆ ಪಟು ಶ್ರೀ ಶರತ್, ಸ್ಥಳೀಯ ಕಾರ್ಪೊರೇಟರ್ ಮಹೇಶ್ ಕುಮಾರ್ ಅವರ ಜೊತೆಗೆ ನನ್ನನ್ನೂ ಪ್ರೀತಿಯಿಂದ ಗೌರವಿಸಿದರು. ಶ್ರೀ ಬಾಲಕೃಷ್ಣ, ಶ್ರೀ ಗುರು ಬಳ್ಳಕುರಾಯ, ಶ್ರೀ ರವೀಂದ್ರ ಕುಮಾರ್ ಮತ್ತಿತರ ಮಿತ್ರರೆಲ್ಲರಿಗೂ ಕೃತಜ್ಞತೆಗಳು..





Saturday 1 December 2018

ಚಿಕ್ಕಪೇಟೆಯಲ್ಲಿ ಸನ್ಮಾನ Felicitation at Chickpet, Tumakuru ( R S Iyer)

ನಮ್ಮ ತುಮಕೂರಿನ ಚಿಕ್ಕಪೇಟೆ ಎಂದರೆ ನಮಗೆ ಒಂದು ರೀತಿ ಭಾವನಾತ್ಮಕ ಸಂಬಂಧ. ಚಿಕ್ಕಪೇಟೆ-ಮಂಡಿಪೇಟೆ ರಸ್ತೆಯಲ್ಲಿ ಶ್ರೀ ಶಿವಸೈನ್ಯ ಕನ್ನಡ ಯುವಕರ ಸಂಘ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲೂ ದಿ.30-11-2018, ಶುಕ್ರವಾರ ಸಂಜೆ ನನ್ನನ್ನು ಆಹ್ವಾನಿಸಿ ಸನ್ಮಾನಿಸಿದರು. ಗೆಳೆಯ ಮಾಜಿ ಕಾರ್ಪೊರೇಟರ್ ಶ್ರೀ ಟಿ.ವಿ. ಚಂದ್ರಶೇಖರ್ (ಪಾತ್ರೆ ಚಂದ್ರು) ಅವರ ನಾಯಕತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ನನ್ನ ಜೊತೆಗೆ ಶ್ರೀ ಕಿರಣ್ ಕುಮಾರ್ ಅವರನ್ನೂ ಸನ್ಮಾನಿಸಲಾಯಿತು. ಮಾಜಿ ಮೇಯರ್ ಶ್ರೀ ಸುಧೀಶ್ವರ್, ಕಾರ್ಪೊರೇಟರ್ ಗಳಾದ ಶ್ರೀ ಮಹೇಶ್ ಕುಮಾರ್, ಶ್ರೀಮತಿ ದೀಪಶ್ರೀ ಮಹೇಶ್, ಇತರ ಗಣ್ಯರಾದ ಶ್ರಿ ಮನೋಹರಗೌಡ, ಶ್ರೀ ಬಾವಿಕಟ್ಟೆ ನಾಗೇಶ್, ಶ್ರೀಮತಿ ಅನಸೂಯ ರತ್ನಯ್ಯಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ಎಲ್ಲ ಸನ್ಮಿತ್ರರಿಗೂ ಕೃತಜ್ಞನಾಗಿದ್ದೇನೆ.









ಬಿ.ಜಿ.ಪಾಳ್ಯ ವೃತ್ತ ರಾಜ್ಯೋತ್ಸವದಲ್ಲಿ ಸನ್ಮಾನ Felicitation at B.G.Palya Circle (R S Iyer)

ನಮ್ಮ ತುಮಕೂರಿನ ಅನೇಕ ಬಡಾವಣೆಗಳಲ್ಲಿ ನನ್ನ ಮಿತ್ರರು ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ಈ ವರ್ಷ ನನಗೆ "ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ'' ಲಭಿಸಿದ್ದಕ್ಕೆ ಆ ಮಿತ್ರರು ಸಂತಸ ಹಂಚಿಕೊಳ್ಳಲು ಆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿ ಪ್ರೀತಿಯಿಂದ ಗೌರವಿಸುತ್ತಿದ್ದಾರೆ. ಜನಮನದಲ್ಲಿ ಸ್ವಾಭಾವಿಕವಾಗಿ ಬೇರೂರಿರುವ ಇಂಥ ಪ್ರೀತಿಯು ಮೂಕನನ್ನಾಗಿಸುತ್ತದೆ. ಅವರ ಪ್ರೀತಿಯನ್ನು ಅತ್ಯಂತ ವಿನಯಪೂರ್ವಕವಾಗಿ ಸ್ವೀಕರಿಸಿ, ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ.
ತುಮಕೂರಿನ ಬಾಳೆಗೌಡನ (ಬಿ.ಜಿ.) ಪಾಳ್ಯ ವೃತ್ತದಲ್ಲಿ ಸ್ಥಳೀಯ ಯುವ ಮುಖಂಡರಾದ ಶ್ರೀ ಪ್ರಸನ್ನ (ಪಚ್ಚಿ) ಅವರ ನೇತೃತ್ವದ "ಮಯೂರ ವರ್ಮ ಕನ್ನಡ ಯುವ ವೇದಿಕೆ'' ನಡೆಸಿದ ರಾಜ್ಯೋತ್ಸವಕ್ಕೆ ದಿ.29-11-2018, ಗುರುವಾರ ರಾತ್ರಿ ನನ್ನನ್ನೂ ಆಹ್ವಾನಿಸಿದ್ದರು. ತುಮಕೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಗಳಾದ ಶ್ರೀ ಮಹೇಶ್ ಕುಮಾರ್ , ಶ್ರೀ ಸೈಯದ್ ನಯಾಜ್, ವಕೀಲರಾದ ಶ್ರೀ ಟಿ.ಎಸ್.ನಿರಂಜನ್, ಶ್ರೀ ನಾಗೇಶ್ ಮೊದಲಾದ ಅನೇಕ ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನನ್ನನ್ನು ಸನ್ಮಾನಿಸಿದರು. ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.




Thursday 29 November 2018

ರೋಟರಿಯಲ್ಲಿ ಸನ್ಮಾನ Felicitation at Rotary Club Tumkur Central - R S Iyer

ತುಮಕೂರಿನಲ್ಲಿ ರೋಟರಿ ಕ್ಲಬ್ ದಶಕಗಳಿಂದ ತನ್ನದೇ ಆದ ವಿಶಿಷ್ಟ ಸೇವಾ ಕಾರ್ಯಗಳಿಂದ ಗುರುತಿಸಲ್ಪಟ್ಟಿದೆ. ನಮ್ಮ ನಗರದ ವಿವಿಧ ಕ್ಷೇತ್ರಗಳ ಗಣ್ಯರುಗಳು ರೋಟರಿ ಕ್ಲಬ್ ನಲ್ಲಿ ಸಕ್ರಿಯರಾಗುವ ಮೂಲಕ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದಾರೆ. 
ಇಂದು (ದಿ.29-11-2018, ಗುರುವಾರ) ಸಂಜೆ ರೋಟರಿ ಕ್ಲಬ್ ತುಮಕೂರು ಸೆಂಟ್ರಲ್ ಗೆ ರೋಟರಿಯ ಜಿಲ್ಲಾ ಗೌರ್ನರ್ ರವರಾದ ಶ್ರೀ ಸುರೇಶ್ ಹರಿ ರವರು ಭೇಟಿ ನೀಡಿದ್ದರು. 
ಇದೇ ಸಂದರ್ಭದಲ್ಲಿ ಇತರ ಸಾಧಕರಾದ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪ, ಶ್ರೀ ಜಿ.ಎಂ.ಸಿದ್ದೇಗೌಡರು ಅವರೊಂದಿಗೆ ನನ್ನನ್ನೂ (ಈ ವರ್ಷ ಪತ್ರಿಕಾ ಕ್ಷೇತ್ರದ ಪರವಾಗಿ ನನಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ) ಆಹ್ವಾನಿಸಿ "ಗೌರವ ಸಮರ್ಪಣಾ ಪತ್ರ" ನೀಡಿ ಪ್ರೀತಿಯಿಂದ ಸನ್ಮಾನಿಸಿದರು.
ರೋಟರಿ ಜಿಲ್ಲಾ ಗೌರ್ನರ್ ಶ್ರೀ ಸುರೇಶ್ ಹರಿ, ಜಿಲ್ಲಾ ಕಾರ್ಯದರ್ಶಿ ಶ್ರೀ ತಿರುಮುರುಗನ್, ಸಹಾಯಕ ಗೌರ್ನರ್ ಶ್ರೀ ಕೆ.ಟಿ.ಥಾಮಸ್, ತುಮಕೂರು ಸೆಂಟ್ರಲ್ ಅಧ್ಯಕ್ಷರಾದ ಶ್ರೀ ಎಂ.ಜಿ.ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಆರ್.ಎನ್.ದಿನಕರ್, ರೋಟೇರಿಯನ್ ಗಳಾದ ಶ್ರೀ ಬೆಳ್ಳಿ ಲೋಕೇಶ್, ಶ್ರೀ ಟಿ.ಆರ್.ಎಚ್.ಪ್ರಕಾಶ್, ಶ್ರೀ ಟಿ.ಬಿ.ಮೃತ್ಯುಂಜಯ, ಶ್ರೀ ಬಿಳಿಗೆರೆ ಶಿವಕುಮಾರ್, ಶ್ರೀ ಬಿ.ಎ.ಶಿವಕುಮಾರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ರೋಟರಿಯ ಎಲ್ಲ ಪದಾಧಿಕಾರಿಗಳು, ಸದಸ್ಯರುಗಳಿಗೆ ವಿಶೇಷವಾಗಿ ಶ್ರೀ ಬೆಳ್ಳಿ ಲೋಕೇಶ್ ಅವರಿಗೆ ಕೃತಜ್ಞತೆಗಳು....






Sunday 25 November 2018

Durgaparameshwari Temple ದುರ್ಗಾಪರಮೇಶ್ವರಿ ದೇಗುಲ R S Iyer

ತುಮಕೂರು ಸನಿಹದ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿ ಇರುವ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಹಾಗೂ ಸ್ವಲ್ಪ ದೂರದ ಸುಗ್ಗನಹಳ್ಳಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅವರೊಡನೆ ನಾವು ಇಂದು (25-11-2018, ಭಾನುವಾರ) ಸಂಜೆ ಅನಿರೀಕ್ಷಿತವಾಗಿ ತೆರಳಿದ್ದಾಗ..









Friday 23 November 2018

ರಾಜ್ಯೋತ್ಸವದಲ್ಲಿ ಸನ್ಮಾನ Felicitation to R S Iyer @ Rajyothsava programme 2018

ನಮ್ಮ ತುಮಕೂರಿನ ಮಾರುತಿ ನಗರದಲ್ಲಿ ''ಮಾರುತಿನಗರ ನಾಗರಿಕ ಹಿತರಕ್ಷಣಾ ಸಮಿತಿ'' ನಡೆಸಿದ ಕನ್ನಡ ರಾಜ್ಯೋತ್ಸವದ ಇಂದಿನ (22-11-2018, ಗುರುವಾರ, ಸಂಜೆ) ಸಮಾರಂಭದಲ್ಲಿ ನನ್ನನ್ನು ಪ್ರೀತಿಯಿಂದ ಸನ್ಮಾನಿಸಿದರು. ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು , ಸಾಹಿತಿಗಳಾದ ಶ್ರೀ ಕವಿತಾಕೃಷ್ಣ ರವರು, ಸಮಿತಿ ಅಧ್ಯಕ್ಷರಾದ ಶ್ರೀ ಸಿದ್ದರಾಮಯ್ಯ ರವರು, ಜಿಲ್ಲಾ ಸರ್ಜನ್ ಡಾ. ವೀರಭದ್ರಯ್ಯರವರು, ಕಾರ್ಪೊರೇಟರ್ ಶ್ರೀ ವಿಷ್ಣುವರ್ಧನರವರು, ಎನ್.ಎಸ್. ಐ ಫೌಂಡೇಷನ್ ನ ಶ್ರೀ ಎನ್.ಎನ್.ಶ್ರೀಧರ್ ಅವರೂ ಸೇರಿದಂತೆ ಅನೇಕ ಗಣ್ಯರುಗಳು ಉಪಸ್ಥಿತರಿದ್ದರು.