* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday 29 November 2018

ರೋಟರಿಯಲ್ಲಿ ಸನ್ಮಾನ Felicitation at Rotary Club Tumkur Central - R S Iyer

ತುಮಕೂರಿನಲ್ಲಿ ರೋಟರಿ ಕ್ಲಬ್ ದಶಕಗಳಿಂದ ತನ್ನದೇ ಆದ ವಿಶಿಷ್ಟ ಸೇವಾ ಕಾರ್ಯಗಳಿಂದ ಗುರುತಿಸಲ್ಪಟ್ಟಿದೆ. ನಮ್ಮ ನಗರದ ವಿವಿಧ ಕ್ಷೇತ್ರಗಳ ಗಣ್ಯರುಗಳು ರೋಟರಿ ಕ್ಲಬ್ ನಲ್ಲಿ ಸಕ್ರಿಯರಾಗುವ ಮೂಲಕ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದಾರೆ. 
ಇಂದು (ದಿ.29-11-2018, ಗುರುವಾರ) ಸಂಜೆ ರೋಟರಿ ಕ್ಲಬ್ ತುಮಕೂರು ಸೆಂಟ್ರಲ್ ಗೆ ರೋಟರಿಯ ಜಿಲ್ಲಾ ಗೌರ್ನರ್ ರವರಾದ ಶ್ರೀ ಸುರೇಶ್ ಹರಿ ರವರು ಭೇಟಿ ನೀಡಿದ್ದರು. 
ಇದೇ ಸಂದರ್ಭದಲ್ಲಿ ಇತರ ಸಾಧಕರಾದ ಶ್ರೀಮತಿ ಅನ್ನಪೂರ್ಣ ವೆಂಕಟನಂಜಪ್ಪ, ಶ್ರೀ ಜಿ.ಎಂ.ಸಿದ್ದೇಗೌಡರು ಅವರೊಂದಿಗೆ ನನ್ನನ್ನೂ (ಈ ವರ್ಷ ಪತ್ರಿಕಾ ಕ್ಷೇತ್ರದ ಪರವಾಗಿ ನನಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ) ಆಹ್ವಾನಿಸಿ "ಗೌರವ ಸಮರ್ಪಣಾ ಪತ್ರ" ನೀಡಿ ಪ್ರೀತಿಯಿಂದ ಸನ್ಮಾನಿಸಿದರು.
ರೋಟರಿ ಜಿಲ್ಲಾ ಗೌರ್ನರ್ ಶ್ರೀ ಸುರೇಶ್ ಹರಿ, ಜಿಲ್ಲಾ ಕಾರ್ಯದರ್ಶಿ ಶ್ರೀ ತಿರುಮುರುಗನ್, ಸಹಾಯಕ ಗೌರ್ನರ್ ಶ್ರೀ ಕೆ.ಟಿ.ಥಾಮಸ್, ತುಮಕೂರು ಸೆಂಟ್ರಲ್ ಅಧ್ಯಕ್ಷರಾದ ಶ್ರೀ ಎಂ.ಜಿ.ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಆರ್.ಎನ್.ದಿನಕರ್, ರೋಟೇರಿಯನ್ ಗಳಾದ ಶ್ರೀ ಬೆಳ್ಳಿ ಲೋಕೇಶ್, ಶ್ರೀ ಟಿ.ಆರ್.ಎಚ್.ಪ್ರಕಾಶ್, ಶ್ರೀ ಟಿ.ಬಿ.ಮೃತ್ಯುಂಜಯ, ಶ್ರೀ ಬಿಳಿಗೆರೆ ಶಿವಕುಮಾರ್, ಶ್ರೀ ಬಿ.ಎ.ಶಿವಕುಮಾರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ರೋಟರಿಯ ಎಲ್ಲ ಪದಾಧಿಕಾರಿಗಳು, ಸದಸ್ಯರುಗಳಿಗೆ ವಿಶೇಷವಾಗಿ ಶ್ರೀ ಬೆಳ್ಳಿ ಲೋಕೇಶ್ ಅವರಿಗೆ ಕೃತಜ್ಞತೆಗಳು....






No comments:

Post a Comment