* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Sunday 11 November 2018

ಗೂಳೂರು ಗಣಪ - ನಮ್ಮೂರ ಹೆಮ್ಮೆ Guluru Ganapathi 2018 R.S.Iyer

ಗೂಳೂರು ಗಣಪ - ನಮ್ಮೂರ ಹೆಮ್ಮೆ
*********************************
ತುಮಕೂರು ನಗರಕ್ಕೆ ಹೊಂದಿಕೊಂಡಂತೆಯೇ ಇರುವ ಪುಟ್ಟ ಗ್ರಾಮ ಗೂಳೂರಿನ ಶ್ರೀ ಗಣಪತಿಯು ನಮ್ಮ ತುಮಕೂರಿನ ಒಂದು ಹೆಮ್ಮೆ. ಬೃಹತ್ ಆಕಾರದಿಂದಲೇ ಈ ಗಣಪತಿಯು ಸುವಿಖ್ಯಾತವಾಗಿದೆ.12 ಅಡಿ ಎತ್ತರ 8 ಅಡಿ ಅಗಲದ ಈ ಗಣಪನನ್ನು ನೋಡುವುದೇ ಚೆನ್ನ. ದೀಪಾವಳಿ ಬಳಿಕ ಸುಮಾರು ಒಂದು ತಿಂಗಳ ಕಾಲ ಈ ಗಣಪತಿಯ ಉತ್ಸವ ಇರುತ್ತದೆ. ಈಗ ದೇಗುಲ ಜೀರ್ಣೋದ್ಧಾರಗೊಂಡು ಆಕರ್ಷಕವಾಗಿದೆ. ನಾವೆಲ್ಲ ಬಾಲ್ಯದಲ್ಲಿ ಗೂಳೂರಿಗೆ ಹೋಗಿ ಗಣಪತಿಯನ್ನು ಕಾಣುವುದೆಂದರೆ ಅದೊಂದು ಸಂಭ್ರಮವೋ ಸಂಭ್ರಮವಾಗುತ್ತಿತ್ತು. ಇಂದು (ದಿ. 11-11-2018, ಭಾನುವಾರ) ಬೆಳಗ್ಗೆ ನಾನು, ವಿಶ್ವನಾಥನ್ R. Vishwanathan Tumkur, ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಅಲ್ಲಿಗೆ ತೆರಳಿ ಗಣಪತಿಯ ಮುಂದೆ ನಿಂತಾಗ ಅವೆಲ್ಲ ನೆನಪಿಗೆ ಬಂದವು.ಗೂಳೂರು ಬದಲಾಗಿದೆ-ಬದಲಾಗುತ್ತಿದೆ. ಆದರೆ ನಮ್ಮ ಗಣಪತಿ ಮಾತ್ರ ಹಾಗೆಯೇ ಇದೆ. ಅದೇ ಆಕರ್ಷಣೆ ಉಳಿದುಕೊಂಡಿದೆ. ಇಂದು ನಮ್ಮೊಡನೆ ಮಿತ್ರರಾದ ಶ್ರೀ ಬಿ.ಎಸ್.ವೆಂಕಟೇಶ್ ಸಹ ಇದ್ದರು.











No comments:

Post a Comment