* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Tuesday 13 November 2018

ಶ್ರೀ ಕರಾಟೆ ಕೃಷ್ಣಮೂರ್ತಿರವರು ಅಭಿನಂದಿಸಿದಾಗ... Sri Karate Krishna Murthy - R.S. Iyer

ಇಂಥ ನಿರ್ಮಲ ಪ್ರಸಂಗಗಳೇ ಚೈತನ್ಯ ತರುವಂಥವು..
******************************************
ಈ ಚಿತ್ರದಲ್ಲಿ ನನ್ನೊಡನೆ ಇರುವವರು ಶ್ರೀ ಕೃಷ್ಣಮೂರ್ತಿರವರು. ತುಮಕೂರಿನಲ್ಲಿ "ಕರಾಟೆ ಕೃಷ್ಣಮೂರ್ತಿ'' ಎಂದೇ ಖ್ಯಾತಿ ಪಡೆದಿರುವವರು. ಕಳೆದ 38 ವರ್ಷಗಳಿಂದಲೂ ಇವರು ಕರಾಟೆ ಪಟುವಾಗಿ, ಕರಾಟೆ ಶಿಕ್ಷಕರಾಗಿ ಹೆಸರು ಗಳಿಸಿರುವವರು. ಈವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಕರಾಟೆ ಕಲಿಸಿರುವವರು ಹಾಗೂ ಈಗಲೂ ಕಲಿಸುತ್ತಿರುವವರು. ಕರಾಟೆಯಲ್ಲಿನ ಇವರ ಸಾಧನೆಗಳು ಗಮನಸೆಳೆಯುವಂಥವು. ಚಿಕ್ಕಪೇಟೆಯ ಹರಿಸಿಂಗರ ಬೀದಿಯ ನಿವಾಸಿಗಳು. ಸುಮಾರು 30 ವರ್ಷಗಳಿಂದಲೂ ಇವರು ನನಗೆ ಸುಪರಿಚಿತರು. ತುಂಬ ಸಂಕೋಚದ ಸ್ವಭಾವದವರು. ಇವರ ಸಜ್ಜನಿಕೆ, ಸಂಭಾವಿತತನವನ್ನು ಚೆನ್ನಾಗಿ ಬಲ್ಲೆ. ಇಂದು (13-11-2018, ಮಂಗಳವಾರ) ಬೆಳಗ್ಗೆ ಅನಿರೀಕ್ಷಿತವಾಗಿ ಕರೆ ಮಾಡಿದ ಇವರು, ನಮ್ಮ ಮನೆಗೆ ಬರುತ್ತಿರುವುದಾಗಿ ತಿಳಿಸಿದರು. ಬನ್ನಿ ಎಂದೆ. ತಮ್ಮ ಮಗ ಸಾಗರ್ ಜೊತೆ ಬಂದರು. ನನಗೆ ಅಚ್ಚರಿ ಕಾದಿತ್ತು. ಈ ಬಾರಿಯ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನನಗೆ ಸಂದ ಸಂತಸಕ್ಕಾಗಿ ನಮ್ಮ ಮನೆಗೇ ಬಂದು ಪ್ರೀತಿಯಿಂದ ಗೌರವಾರ್ಪಣೆ ಮಾಡಿದರು. ನಾನಂತೂ ಮೂಕನಾದೆ. ಇಂಥ ನಿರ್ಮಲವಾದ ಪ್ರಸಂಗಗಳೇ ಚೈತನ್ಯ ಮೂಡಿಸುವಂಥವು ಅನ್ನಿಸಿತು.









No comments:

Post a Comment