* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday 8 January 2021

Brahmana Abhivruddhi Mandali programme ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸಭೆಯಲ್ಲಿ.... 06-01-2021 R S Iyer-

 06-01-2021, ಬುಧವಾರ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು “ಪ್ರತಿಭೋತ್ಸವ” ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಗಣ್ಯ ಸಾಧಕರನ್ನು ಸನ್ಮಾನಿಸಲಾಯಿತು. ಜೊತೆಯಲ್ಲೇ ಸಮುದಾಯದ ಹಿತರಕ್ಷಣೆಗಾಗಿ ಮಂಡಳಿಯು ರೂಪಿಸಿರುವ ವಿವಿಧ ಯೋಜನೆಗಳನ್ನು ವಿಧಾನ ಸಭಾಧ್ಯಕ್ಷರೂ ಸೇರಿದಂತೆ ಉಪಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರುಗಳು, ಸಂಸದರುಗಳು ಚಾಲನೆಗೊಳಿಸಿದರು. ಮಂಡಳಿಯ ಕ್ರಿಯಾಶೀಲ ಅಧ್ಯಕ್ಷರಾದ ಶ್ರೀ ಹೆಚ್.ಎಸ್.ಸಚ್ಚಿದಾನಂದ ಮೂರ್ತಿ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ಆಹ್ವಾನಿತ ಗಣ್ಯರೆಲ್ಲರೂ ತಮ್ಮ ಭಾಷಣದಲ್ಲಿ ಮುಕ್ತಕಂಠದಿಂದ ಪ್ರಶಂಸಿಸಿ ಯಶ ಕೋರಿದರು.
ಕಾರ್ಯಕ್ರಮದಲ್ಲಿ ನಾನು, ವಿಶ್ವನಾಥನ್ ಮತ್ತು ನಿವೃತ್ತ ಇಂಜಿನಿಯರ್ ಶ್ರೀ ರಾಮಶೇಷರವರು ಭಾಗವಹಿಸಿದ್ದೆವು. ಕಾರ್ಯಕ್ರಮದ ಬಳಿಕ ಮಂಡಳಿಯ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಮೂರ್ತಿಯವರನ್ನು ಅಭಿನಂದಿಸಿದೆವು. ಇದೇ ಸಂದರ್ಭದಲ್ಲಿ ಮಂಡಳಿಯ ನಿರ್ದೇಶಕರಲ್ಲೊಬ್ಬರಾದ ಹಾಗೂ ಮಂಡಳಿಯ ಪರವಾಗಿ ತುಮಕೂರು ಜಿಲ್ಲಾ ಜವಾಬ್ದಾರಿ ಹೊತ್ತಿರುವ ಶ್ರೀ ಎ.ಜೆ.ರಂಗವಿಠ್ಠಲರವರು ತುಮಕೂರಿನಿಂದ ತೆರಳಿದ್ದ ನಮ್ಮನ್ನು ಕಂಡು ಹರ್ಷದಿಂದ ಅಭಿನಂದಿಸಿದರಲ್ಲದೆ, ಸ್ವಯಂಪ್ರೇರಣೆಯಿಂದ ನಮ್ಮೊಡನೆ ಒಂದು ಫೋಟೋಗೂ ಜೊತೆಗೂಡಿದರು. ಕಾರ್ಯಕ್ರಮದಲ್ಲಿ ಮೈಸೂರಿನ ಯುವಮುಖಂಡರಾದ ಶ್ರೀ ಅಜಯ್ ಕುಮಾರ್ ಶಾಸ್ತ್ರಿರವರು, ಶ್ರೀ ವಿಕ್ರಂ ಅಯ್ಯಂಗಾರ್ ರವರು ಸೇರಿದಂತೆ ಕೆಲ ಮಿತ್ರರು ಭೇಟಿಯಾದರು.






No comments:

Post a Comment