* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday 21 January 2021

V S.R. Visit to Karigiri Oils & Naturals Tumkur 21-01-2021 ಕರಿಗಿರಿ ಆಯಿಲ್ಸ್ ಗೆ ಭೇಟಿ

 ಗಾಣದಿಂದ ಶುದ್ಧ ಅಡುಗೆ ಎಣ್ಣೆ ಉತ್ಪಾದಿಸುವ ಘಟಕಕ್ಕೆ ಭೇಟಿ

************************************************
ತುಮಕೂರಿನ ಎಸ್.ಐ.ಟಿ. ಮುಖ್ಯರಸ್ತೆಯಲ್ಲಿರುವ “ಕರಿಗಿರಿ ಆಯಿಲ್ಸ್ ಅಂಡ್ ನ್ಯಾಚುರಲ್ಸ್” ಮಳಿಗೆಗೆ ಇಂದು (21-01-2021, ಗುರುವಾರ) ಸಂಜೆ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (92) ರವರು ಭೇಟಿ ನೀಡಿದ್ದರು.
ಮರದ ಗಾಣದಿಂದ ಶುದ್ಧವಾದ ಅಡುಗೆ ಎಣ್ಣೆಯನ್ನು ಉತ್ಪಾದಿಸುವ ಈ ಸಣ್ಣ ಘಟಕವನ್ನು (ಟ್ರೆಂಡ್ಸ್ ಮಳಿಗೆ ಪಕ್ಕ) ಯುವ ಇಂಜಿನಿಯರ್ ಶ್ರೀ ವಿ.ವಿವೇಕ್ ಅವರು ಸ್ವಾವಲಂಬಿಯಾಗಿ ಆರಂಭಿಸಿದ್ದಾರೆ.
ಕೊಬ್ಬರಿ ಎಣ್ಣೆ, ಕಡಲೆಕಾಯಿ ಎಣ್ಣೆ, ಎಳ್ಳೆಣ್ಣೆ, ಹುಚ್ಚೆಳ್ಳಿನ ಎಣ್ಣೆ, ಹರಳೆಣ್ಣೆ, ಸಾಸಿವೆ ಎಣ್ಣೆ, ಕುಸುಬೆ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮೊದಲಾದ ಅಡುಗೆ ಎಣ್ಣೆಯನ್ನು ಇಲ್ಲಿ ಮರದ ಗಾಣದಿಂದ ಶುದ್ಧವಾಗಿ ಉತ್ಪಾದಿಸಲಾಗುತ್ತಿದ್ದು, ಯಾವುದೇ ಕಲಬೆರಕೆಯಿಲ್ಲದ ಪರಿಶುದ್ಧವಾದ ಅಡುಗೆ ಎಣ್ಣೆ ಇಲ್ಲಿ ಮಾರಾಟವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಪ್ರಜ್ಞೆ ಜಾಗೃತವಾಗುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಈ ಘಟಕ ಅನೇಕ ಗ್ರಾಹಕರನ್ನು ಆಕರ್ಷಿಸುತ್ತಿದೆ. “ಕೊರಟಗೆರೆಯ ಮಾಜಿ ಶಾಸಕರಾದ ಶ್ರೀ ಸುಧಾಕರ ಲಾಲ್ ರವರೂ ಸೇರಿದಂತೆ ಅನೇಕ ಜನರು ನಮ್ಮ ಖಾಯಂ ಗ್ರಾಹಕರಾಗಿದ್ದಾರೆ” ಎಂಬುದು ಶ್ರೀ ವಿವೇಕ್ ರವರ ಹೆಮ್ಮೆಯ ನುಡಿ.
Sri V.S.Ramachandran (92), Freedom Fighter, Tumkur visited Karigiri Oils & Naturals, SIT Main Road, Tumkur on 21-01-2021

Sri V.S.Ramachandran, Freedom Fighter and V. Vivek





V. Vivek with Sri V.S.Ramachandran (92) , Freedom Fighter, Tumkur

V.S.Ramachandran felicitated V. Vivek with Lord Sri Ganesha Idol




No comments:

Post a Comment