* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday 16 January 2021

Felicitation by Dr. k R Sriharsha to VSR & R S Iyer -2021

Felicitation by Dr. k R Sriharsha, Chairman, State Environment Impact Assessment Authority, Karnataka to V S Ramachandran & R S Iyer - 15-01-2021

ಮನೆಗೆ ಆಮಂತ್ರಿಸಿ ಆತಿಥ್ಯ, ಗೌರವಾರ್ಪಣೆ
*********************************
“ನಿಮ್ಮ ತಂದೆಯವರೊಂದಿಗೆ ಮನೆಗೆ ಬನ್ನಿ” ಎಂದು ಪ್ರೀತಿಯಿಂದ ಆಹ್ವಾನಿಸಿದ್ದವರು ಕರ್ನಾಟಕ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ (State Environment Impact Assessment Authority Karnataka) ಅಧ್ಯಕ್ಷರಾದ ಡಾ.ಕೆ.ಆರ್. ಶ್ರೀಹರ್ಷರವರು.
ದಿ. 15-01-2021 ರಂದು ಬೆಂಗಳೂರಿಗೆ ತೆರಳಿದ್ದಾಗ ಹಾಗೆಯೇ ಎನ್.ಆರ್. ಕಾಲೋನಿಯಲ್ಲಿರುವ ಅವರ ನಿವಾಸಕ್ಕೆ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ ಭೇಟಿ ಕೊಟ್ಟೆವು. ತುಂಬ ಪ್ರೀತಿಯಿಂದ ಬರಮಾಡಿಕೊಂಡರು. ಅಲ್ಲಿ ಡಾ. ಹರ್ಷ ಅವರು ನಮ್ಮ ತಂದೆಯವರಿಗೆ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಕನ್ನಡದ ಪ್ರಖ್ಯಾತ ವಿದ್ವಾಂಸರಾಗಿದ್ದ ಡಾ.ಎ.ಆರ್.ಕೃಷ್ಣಶಾಸ್ತ್ರಿಗಳ ಸುಪ್ರಸಿದ್ಧ ಕೃತಿ “ವಚನ ಭಾರತ” ನೀಡಿ ಗೌರವಾರ್ಪಣೆ ಮಾಡಿ ಆಶೀರ್ವಾದ ಪಡೆದುಕೊಂಡರು. ಜೊತೆಯಲ್ಲೇ ಅನಿರೀಕ್ಷಿತವಾಗಿ ನನಗೂ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಗೌರವಿಸಿದರು. ನಂತರ ಆತಿಥ್ಯ. ಬಳಿಕ ಒಂದಿಷ್ಟು ಮಾತುಕತೆ. ಅವರ ಈ ನಿರ್ಮಲ ಪ್ರೀತಿ-ವಿಶ್ವಾಸಕ್ಕೆ ನಾವು ಅಕ್ಷರಶಃ ಮೂಕರಾದೆವು.
ಡಾ.ಕೆ.ಆರ್. ಶ್ರೀಹರ್ಷರವರು ಮೂಲತಃ ಪರಿಸರ ಇಂಜಿನಿಯರ್. BE, M Tech ಮತ್ತು Ph.D ಪದವೀಧರರು. ಸ್ವಉದ್ಯೋಗಿಗಳು. ಇತ್ತೀಚೆಗೆ ಕೇಂದ್ರ ಸರ್ಕಾರ ಇವರನ್ನು ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ ಛೇರ್ಮನ್ ಸ್ಥಾನಕ್ಕೆ 3 ವರ್ಷಗಳ ಅವಧಿಗೆ ನಾಮನಿರ್ದೇಶನ ಮಾಡಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಲಿಯ ಆನಂತರದ ಸ್ಥಾನದಲ್ಲಿ ಈ ಪ್ರಾಧಿಕಾರ ಕಾರ್ಯನಿರ್ವಹಿಸುತ್ತದೆ. ರಾಜ್ಯ ಮಟ್ಟದ ಕಾರ್ಯವ್ಯಾಪ್ತಿಯುಳ್ಳ ಈ ಪ್ರಾಧಿಕಾರದ ಕಚೇರಿಯು M.S. ಬಿಲ್ಡಿಂಗ್ ನಲ್ಲಿದೆ.
ಇವರ ಧರ್ಮಪತ್ನಿ ಶ್ರೀಮತಿ ನಿಧಿರವರು ಎ.ಆರ್.ಕೃಷ್ಣಶಾಸ್ತ್ರಿಗಳ ಮರಿಮಗಳು ಎಂಬುದು ವಿಶೇಷ. (ಅಂದ ಹಾಗೆ ಶ್ರೀಯುತರು ಈವರೆಗೆ ತುಮಕೂರಿನ ಆರ್ಯಭಾರತಿ ಪಾಲಿಟೆಕ್ನಿಕ್ ನ ಪ್ರಾಚಾರ್ಯರಾಗಿದ್ದ ಶ್ರೀ ಕೆ.ಆರ್.ಅಶೋಕ್ ರವರ ಕಿರಿಯ ಸಹೋದರರು.)
ಸುಸಂಸ್ಕೃತರೂ, ಸಂಸ್ಕಾರವಂತರೂ, ಸಂಭಾವಿತರೂ ಆದವರ ನಡೆ-ನುಡಿ ಹೇಗಿರುತ್ತದೆಂಬುದನ್ನು ಈ ಭೇಟಿಯು ಸೊಗಸಾಗಿ ಅನಾವರಣಗೊಳಿಸಿತು.
-ಆರ್.ಎಸ್.ಅಯ್ಯರ್, ತುಮಕೂರು





No comments:

Post a Comment